ಹುಡುಕ್ಕೊಂಡ್ ಹೋಯ್ತೋ

ಹುಡುಕ್ಕೊಂಡ್ ಹೋಯ್ತೋ
ಹಕ್ಕಿ ಹುಡುಕ್ಕೊಂಡ್ ಹೋಯ್ತೋ
ಹಕ್ಕಿ ಹಾರಾಡ್ಕೊಂಡ್ ಹೋಯ್ತೋ ||

ಆ ಮರ ಈ ಮರ ನೆಲ ಮರ
ಶಾಶ್ವತವಲ್ಲದ ಮರ ರೆಂಬೆಕೊಂಬೆಗಳ
ಗೂಡುಗಳ ತೂರಿ ಹಾರ್‌ಕೊಂಡ್ ಹೋಯ್ತೊ ||

ಯಾವ ಜೀವ ಜೀವಿಗಳ
ದಾಹದಲ್ಲಿ ಮಾಡಿದ ಕರ್‍ಮ
ಅಂಗಸಂಗಗಳ ಬೆಸೆದು
ಅರಿವಿನ ಅಂಗಿನ ತೊಟ್ಟು ||

ಬೆಳೆದ ಬೇಸಾಯ ಫಲ ಫಲವಲ್ಲ
ಗಿಡಮರದ ಕಾಯಿ ಹಣ್ಣು ಹಣ್ಣಲ್ಲ
ಯಾವ ಕಾಯಕದ ನೆಲ ದಕ್ಕಿದೆ
ಹಕ್ಕಿ ಅದೇ ಕರ್‍ಮದ ಫಲ ||

ಸಾಸಿರ ನಾಮದ ಪುಣ್ಯದ ಫಲ
ಎಲ್ಲಾ ಫಲಗಳಲ್ಲಿ ಇಲ್ಲಾ ಬಲ
ಬೆಲೆ ಇಲ್ಲಾ ನೀ ರುಚಿಸುವ ತನಕ
ವೆಂಕಟರಮಣನಿಗೆ ಇಷ್ಟವಾಗುವ ತನಕ ||

ಹುಡುಕ್ಕೊಂಡ್ ಹೋಯ್ತೋ ಹಕ್ಕಿ
ರೆಕ್ಕೆ ಬಿಚ್ಚಿ ಸ್ವಚ್ಛಂದ ಹಾರಾಡಿ
ಬೆಟ್ಟ ಗುಡ್ಡ ಹಾದಿ ಗಟ್ಟಿಗಿತ್ತಿಯಾಗಿ
ತನ್ನನೊಳಗಣ ಗುರುಲಿಂಗನ ನೆನೆದು ||

ನೂರು ವರುಷ ದಾಟಿ ನೂರಾರು
ಬೆಳಕ ಚೆಲ್ಲಿ ಹಾಡಿ ಹಾಡ
ಬಣ್ಣಗಳನು ಅಂಗೈಯಲ್ಲಿ
ಹಿಡಿದ ಹಕ್ಕಿ ಚುಕ್ಕಿಯ ಬರೆದು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಜ ಸ್ಪಂದನ
Next post ಒಲವು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys